`ಲೈಫು ಇಷ್ಟೇನೆ` ಭರ್ಜರಿ ಧ್ವನಿಸುರುಳಿ ಬಿಡುಗಡೆ ಸಮಾರಂಭ
Posted date: 17 Wed, Aug 2011 ? 10:44:09 AM

ಎಸ್.ಎಸ್. & ಕೆ.ಕೆ. ಫಿಲಂಸ್ ಲಾಂಛನದ ’ಲೈಫು ಇಷ್ಟೇನೆ’ ಕಳೆದ ವಾರ ನಗರದ ರಾಧಾಬಾಯಿ ತಿಮ್ಮಪ್ಪ ಭಂಢಾರಿ ಆಡಿಟೋರಿಯಂ, ಬಂಟ್ಸ್ ಸಂಘದಲ್ಲಿ ಧ್ವನಿಸುರುಳಿ ಬಿಡುಗಡೆಯನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೈ ಕರ್ನಾಟಕದ ಗೃಹಮಂತ್ರಿ ಆರ್. ಅಶೋಕ್ ಅವರ ಸಮ್ಮಖದಲ್ಲಿ ಮಾಡಲಾಯಿತು.

ಅಂದಿನ ಸಮಾರಂಭದಲ್ಲಿ ಹಾಡು, ಕುಣಿತ, ಹಾಸ್ಯ ಮಿಶ್ರಿತ ರಸಮಂಜರಿ ಕಾರ್ಯಕ್ರಮದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಲಾಯಿತು. ಅಶ್ವಿನಿ ಮೀಡಿಯಾ ನೆಟ್‌ವರ್ಕ್ ಹೊರತಂದಿರುವ ’ಲೈಫು ಇಷ್ಟೇನೆ’ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಪುನೀತ್ ರಾಜ್‌ಕುಮಾರ್ ಮಾತನಾಡುತ್ತಾ ಚಿತ್ರ ದೊಡ್ಡ ಯಶಸ್ಸು ಕಾಣಲಿ, ನಿರ್ಮಾಪಕರಿಗೆ ಹಣ ಬರಲಿ ಎಂದು ಆಶಿಸಿದರು. ಸಚಿವ ಆರ್. ಅಶೋಕ್ ಸಹ ಈ ಚಿತ್ರಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ನಾಯಕ ದಿಗಂತ್ ತಾವು ಈ ಚಿತ್ರದಲ್ಲಿ ಪ್ರತಿ ಗಳಿಗೆ ಪ್ರೀತಿಯಲ್ಲಿ ಬೀಳುವುದನ್ನು ಹೇಳಿಕೊಂಡು ಚಿತ್ರ ಕುತೂಹಲದಿಂದ ಸಾಗುವುದು ಎಂದು ವಿವರಿಸಿ ’ಲೈಫು ಇಷ್ಟೇನೆ’ ತಮಗೆ ಯಶಸ್ಸು ನೀಡುವುದಾಗಿ ಹೇಳಿಕೊಂಡರು. ನಾಯಕಿಯರಾದ ಸಿಂಧು ಹಾಗೂ ಸಂಯುಕ್ತ ಚಿತ್ರೀಕರಣದ ಸಂದರ್ಭದಲ್ಲಿ ತಮಗಾದ ಅನುಭವವನ್ನು ವಿವರಿಸಿದರು. ಚಿತ್ರದ ಸಂಗೀತ ನಿರ್ದೇಶಕ ಮನೋಮೂರ್ತಿ ’ಲೈಫು ಇಷ್ಟೇನೆ’ ಯಶಸ್ಸಾಗುವ ಎಲ್ಲಾ ಸೂಚನೆಗಳು ಕಾಣುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ಅಂದಿನ ಸಮಾರಂಭದಲ್ಲಿ ತಬಲಾ ನಾಣಿ ಹಾಗೂ ಮಿತ್ರ ನಾಯಕ ದಿಗಂತ್ ಕುರಿತಾಗಿ ನಡೆಸಿಕೊಟ್ಟ ಹಾಸ್ಯ ಕಾರ್ಯಕ್ರಮ ಎಲ್ಲರನ್ನು ನಗೆಗಡಲಲ್ಲಿ ತೇಲಿಬಿಟ್ಟಿತು. ನಟಿ ನೀತು, ಸಿಂಧು ಹಾಗೂ ಸಂಯುಕ್ತ ಹಾಡುಗಳಿಗೆ ಹೆಜ್ಜೆ ಹಾಕಿದರು.
ಸಮಾರಂಭದಲ್ಲಿ ನಟ ಆದಿತ್ಯ, ಯೋಗರಾಜ್‌ಭಟ್, ನಿರ್ಮಾಪಕರಾದ ಎಂ. ಮಂಜುನಾಥ್, ಸೈಯದ್ ಸಲಂ, ಆರ್. ಉಪೇಂದ್ರ ಶೆಟ್ಟಿ ಮತ್ತಿತರರು ಹಾಜರಿದ್ದರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed